== ದಂಡ ಸಂಹಿತೆಯಲ್ಲಿ ತಿದ್ದುಪಡಿ == ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498ಕ್ಕೆ ತಿದ್ದು­ಪಡಿ ತಂದು 498ಎ ಸೇರ್ಪಡೆ ಮಾಡಿರುವುದು ಮಹಿಳೆ­ಯರ ರಕ್ಷಣೆ ಗಾಗಿ. ದುರದೃಷ್ಟವಶಾತ್‌, ಎಷ್ಟೋ ಸಂದರ್ಭ­ಗಳಲ್ಲಿ ಈ ತಿದ್ದುಪಡಿಯಿಂದ ಆಕೆಯ ಜೀವನವೇ ಅಲ್ಲೋಲ ಕಲ್ಲೋಲ­ವಾಗುತ್ತಿದೆ. ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲು ಮಾಡುವುದರಿಂದ, ಅವರ ಜೀವನ ಹಾಳು ಆಗು­ವುದು ಮಾತ್ರವಲ್ಲದೇ, ದಂಪತಿ ನಡುವೆ ವೈಷಮ್ಯದ ಬೀಜ ಮೊಳಕೆ ಒಡೆದು, ಅದು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದೆ. ಇದ­ರಿಂದ ಮಕ್ಕಳ ಭವಿಷ್ಯಕ್ಕೂ ಕುತ್ತು. ಮಹಿಳೆಯ ಪರ ಮಾಡಿರುವ ಕಾನೂನು ಆಕೆಯ ದಾಂಪತ್ಯ ಜೀವನಕ್ಕೇ ಮುಳುವಾಗುತ್ತಿದೆ! ಇವೆಲ್ಲ ಮನಗಂಡು ತಿದ್ದುಪಡಿ ಬಗ್ಗೆ ಚಿಂತಿಸಲು 2000ನೇ ಸಾಲಿನಲ್ಲಿ ನ್ಯಾ. ವಿ.ಎಸ್‌. ಮಳೀಮಠನೇತೃತ್ವದ ಸಮಿತಿ ರಚನೆಯಾಗಿತ್ತು. 2003ರಲ್ಲಿ ಸಮಿತಿ ವರದಿ ನೀಡಿದೆ. ಅದರಲ್ಲಿ ಈ ಕಾಯ್ದೆಯ ಅದರಲ್ಲಿ ಈ ಕಾಯ್ದೆಯ ದುರುಪಯೋಗದ ಬಗ್ಗೆ ಸವಿಸ್ತಾರವಾಗಿ ವಿವರಿಸ­ಲಾ­­ಗಿದೆ. ಪೊಲೀಸರು ಏಕಾ­ಏಕಿ ಎಲ್ಲ ಆರೋಪಿಗಳನ್ನು ಬಂಧಿಸ­ಬಾ­­ರದು, ಇದನ್ನು ಜಾಮೀ­ನು­ರಹಿತ ಅಪರಾಧ ಎಂದು ಪರಿಗಣಿಸ­ಬಾರದು ಹಾಗೂ ದೂರು ದಾಖಲಾದ ನಂತರ ಒಂದು ವೇಳೆ ಪತ್ನಿ ರಾಜಿ ಮಾಡಿ­ಕೊ­ಳ್ಳಲು ಇಷ್ಟಪಟ್ಟರೆ, ಅದಕ್ಕೆ ಅವಕಾಶ ನೀಡಬೇಕು ಎಂದು ವರದಿ­ಯಲ್ಲಿ ತಿಳಿಸಲಾಗಿದೆ. ಆದರೆ ವರದಿ ಸಲ್ಲಿಸಿ ದಶಕ ಕಳೆದರೂ ಇದನ್ನು ಸಂಸತ್ತಿನ ಮುಂದಿಟ್ಟು ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ ಈ ಕಾನೂನಿನ ತಿದ್ದುಪಡಿ ಕುರಿತು ಸುಪ್ರೀಂಕೋರ್ಟ್ ಹೇಳಿರು­ವುದು ಇದೇ ಮೊದಲಲ್ಲ. ತಿದ್ದುಪಡಿ ಕುರಿ­ತಾಗಿ ಅನೇಕ ಪ್ರಕರಣಗಳಲ್ಲಿ ಕೇಂದ್ರಕ್ಕೆ ಸೂಚನೆ ನೀಡುತ್ತಲೇ ಬಂದಿದೆ. ‘ನ್ಯಾಯಮೂರ್ತಿ ವಿ.ಎಸ್‌.ಮಳೀಮಠ ನೇತೃತ್ವದ ಸಮಿತಿ ನೀಡಿ­ರುವ ವರದಿಯ ಅನುಷ್ಠಾನ ಮಾಡಬೇಕು’ ಎಂದು ಎಷ್ಟೋ ಪ್ರಕರಣಗಳಲ್ಲಿ ತಿಳಿಸಿದೆ. ಆದರೆ ಏನೂ ಆಗಲಿಲ್ಲ. ಕಾನೂನು ತಿದ್ದುಪಡಿ ಮಾಡಬೇಕಿದೆ. == ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ಮತ್ತು ಶಿಕ್ಷೆ == ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದೆಹಲಿ - 11440,, ಮುಂಬಯಿ - 2946 ಬೆಂಗಳೂರು - 2608; ವರದಕ್ಷಣೆ ಸಾವು ದೆಹಲಿ:124, ಪಾಟ್ಣಾ:61, ಬೆಂಗಳೂರು:52; ಮಹಿಳೆಯ ಮೇಲೆ ದೌರ್ಜನ್ಯ ಅಪರಾಧ ಪ್ರಕರಣ ಐ ಪಿ ಸಿ ಕಾಯಿದೆ 498 -ಬಂಧಿತರು :197762; ಅದರಲ್ಲಿ ಬಂಧಿತ ಮಹಿಳೆಯರು :47951 ; ಆರೋಪ ಪಟ್ಟಿ ಪ್ರಮಾಣ : 93.6pc ಶಿಕ್ಷೆಯ ಪ್ರಮಾಣ :15pc ದೇಶದಲ್ಲಿ ದಾಖಲಾದ ವರದಕ್ಷಣೆ ಸಾವು ವರ್ಷ-----ಸಂಖ್ಯೆ 2008–8,172 2009–8,383 2010–8,391 2011–9,618 2012–8,233 2013–8,083 ಆಧಾರ :ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ- 2012ಮತ್ತು--2013 (ಸಂಗ್ರಹಕಾರರು :ಡಾ.ಮೈತ್ರೇಯಣಿ ಮತ್ತು ಕೆ.ಎಸ್.ವಿಮಲಾ :ಅಂತರಾಳ :ಪ್ರಜಾವಾಣಿ 12-7-2014) == ನೋಡಿ == ಮಹಿಳೆ ಮತ್ತು ಭಾರತ == ಪೂರಕ ಓದಿಗೆ == ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ;ಜಯ್ನಾ ಕೊಠಾರಿ 2016-10-18 ವೇಬ್ಯಾಕ್ ಮೆಷಿನ್ ನಲ್ಲಿ. == ಆಧಾರ == ನ್ಯಾ.ಮಳೀಮಠ್ ಸಮಿತಿ ವರದಿ. ನ್ಯಾ. ವಿ.ಎಸ್‌. ಮಳೀಮಠ ಸಂದರ್ಶನ- ನಿರೂಪಣೆ: ಸುಚೇತನಾ ನಾಯ್ಕ (ಪ್ರಜಾವಾಣಿ ೧೨೭-೨೦೧೪)